SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ದೇವಸ್ಥಾನದಲ್ಲಿ ಕಳುವು:ದೂರು ದಾಖಲು ದೇವಸ್ಥಾನದಲ್ಲಿ ಕಳುವು:ದೂರು ದಾಖಲು ================================================================================ yammar manvi on 29 July, 2010 11:37:00 ಭಟ್ಕಳ: ತಾಲೂಕಿನ ಬೆಳಕೆ ಗ್ರಾ.ಪಂ. ವ್ಯಾಪ್ತಿಯ ಕಿರು ಹೊಳೆ ಮಹಾಸತಿ ದೇವಸ್ಥಾನದ ಬಾಗಿಲು ಚಿಲಕವನ್ನು ಮುರಿದು ಒಳ ಹೊಕ್ಕ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ ನಗದು ಹಣ, ಚಿನ್ನ ಬೆಳ್ಳಿ ಸೇರಿದಂತೆ ಸುಮಾರು ೧೭೫೦೦ ರೂ ಮೌಲ್ಯದ ಕಳುವು ಆಗಿದೆ ಎಂದು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ಈ ಕುರಿತು ಗೊರ್ಟೆಯ ಮಾಸ್ತಿ ಸೋಮಯ್ಯ ಖಾರ್ವಿ ಎಂಬುವವರು ದೋರನ್ನು ಸಲ್ಲಿಸಿದ್ದು ಬುಧವಾರ ರಾತ್ರಿ ೧೧ ಗಂಟೆಯಿಂದ ಗುರುವಾರ ಬೆಳಿಗಿನ ಜಾವದ ವರೆಗೆ ಕಳುವು ಆಗಿರಬಹುದೆಂದು ಶಂಕಿಸಲಾಗಿದೆ. ದೇವಸ್ಥಾನದ ೧.೫ ಕೆ.ಜಿ ತೂಕದ ಬೆಳ್ಳಿಯ ಪ್ರಭಾವಳಿ, ಚಿನ್ನದ ತಾಳಿ ಬೊಟ್ಟು ಹಾಗೂ ಕಾಣಿಕೆ ಹುಂಡಿಯಲ್ಲಿನ ೪೫೦೦ ರೂಗಳು ಕಳ್ಳತನಗೊಂಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.